Tuesday, July 15, 2014

ಕೃಷ್ಣಸಖಿ (poem)

                   ಕೃಷ್ಣಸಖಿ


ಮೃದುಭಾಷಿ ಸುಂದರಿ ರಾಜಕುವರಿ  ತಾ
ವರಿಸಿದಳು ಮಹಾರಾಜ ರಾಣಾ ಕುಂಭನಾ
ತೊರೆದಳು ಐಹಿಕ ಸುಖ-ಭೋಗವ
ಸೇರಿದಳು ಭಾಗವತರೊಂದಿಗೆ ದೇವಮಂದಿರವ

ಮತ್ಸರ ತಳೆದವರು ಕಳುಹಿದರು ಹಾವ
ಅದಾಯಿತು  ಪುತ್ಥಳಿಯ ಕೊರಳಿನ ಹಾರ
ಹಾಲಾಹಲವದು ಸಿಹಿ-ಸವಿಯ ಜೇನಾಯ್ತು
ಆಣಿಯ ಹಾಸು ಅರಳಿದ ಕುಸುಮದಂತಾಯ್ತು

ಬೃಂದಾವನದಿ ಹರಿಯಿತು ಅವಳ ಕೃಷ್ಣಪ್ರೇಮ
ಭವಬಂಧನ ಮರೆತು ಮನವಾಯ್ತು ನಿಷ್ಕಾಮ
ಬಂದರಾ ಅಕ್ಬರ್ ತಾನ್ಸೇನರು  ಜೊತೆಗೂಡಿ
ಸಾಧ್ವಿ ತಾನಾಗಿದ್ದಳು ಕೃಷ್ಣನ ಒಡನಾಡಿ

ಪತಿ ಬಂದನು ಜೊತೆಗಿರಲಾರೆವೇ ನಾವೆಂದು
ನುಡಿದಳಾಕೆ ಪತ್ನಿ ನಾನು ಶ್ರೀಕೃಷ್ಣನಿಗೆಂದು
ದುಃಖಿಸಿದನು  ರಾಣಾ ಸಹಿಸಲಾರದ ನೋವೆಂದು
ಅರಿತನಾಕೆ ಶ್ರೀಕೃಷ್ಣನಿಗರ್ಪಿತವಾದ ನಿರ್ಮಾಲ್ಯದ ಹೂವೆಂದು

- ತಾರಾ ಶೈಲೇಂದ್ರ


 

No comments:

Post a Comment